JSS ಪ್ರೌಢಶಾಲೆ
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತು ಸಬಲೀಕರಣದ ಉದ್ದೇಶದಿಂದ ಸುತ್ತೂರಿನಲ್ಲಿ 1962-63ರಲ್ಲಿ ಶಾಲೆಯೊಂದನ್ನು ಸ್ಥಾಪಿಸಲಾಯಿತು. 1991-92ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ಈ ಶಾಲೆಯಲ್ಲಿ ಈಗ ನರ್ಸರಿಯಿಂದ 10ನೇ ತರಗತಿಯವರೆಗಿನ ಶಿಕ್ಷಣ ದೊರಕುತ್ತಿದೆ.
ಸುತ್ತೂರು ಶ್ರೀಮಠದ 24ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಬಡ ಕಾರ್ಮಿಕರು ಹಾಗೂ ಬಡ ಕುಟುಂಬಗಳ ಮಕ್ಕಳಿಗೂ ಸಹ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವ ಉದ್ದೇಶದೊಂದಿಗೆ 2001-02ರಲ್ಲಿ ಸುತ್ತೂರಿನಲ್ಲಿ ವಸತಿ ಶಾಲೆಯನ್ನು ಸ್ಥಾಪಿಸಿದರು. ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನೂ ಒಳಗೊಂಡಿರುವ ಈ ಶಾಲೆಯನ್ನು ಭಾರತದ ಅಂದಿನ ರಾಷ್ಟçಪತಿಗಳಾದ ಗೌರವಾನ್ವಿತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಉದ್ಘಾಟಿಸಿದರು.
ಕೆಲವೇ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 4000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 3000 ವಿದ್ಯಾರ್ಥಿಗಳು ವಸತಿನಿಲಯಗಳಲ್ಲಿ ಆಶ್ರಯ ಪಡೆದಿದ್ದಾರೆ. ಕರ್ನಾಟಕವಷ್ಟೇ ಅಲ್ಲದೆ, ಮೆಘಾಲಯ, ಮಣಿಪುರ, ಜಾರ್ಖಂಡ್ ಮತ್ತು ಬಿಹಾರ ಮುಂತಾದ ಬರಪೀಡಿತ ಮತ್ತು ಹಿಂದುಳಿದ ಪ್ರದೇಶಗಳಿಂದ ಬಂದಿರುವ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಉಚಿತ ಶಿಕ್ಷಣದ ಜೊತೆಗೆ, ಊಟ, ವಸತಿ, ಪಠ್ಯಪುಸ್ತಕಗಳು, ಸಮವಸ್ತç ಮತ್ತು ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಇದು ಸಹಶಿಕ್ಷಣ ಶಾಲೆಯಾಗಿದ್ದು, ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿನಿಲಯಗಳಿವೆ. ಇಲ್ಲಿ 1000ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.
ಇಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪಠ್ಯಕ್ರಮದ ಅನುಸಾರ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮತ್ತು ಇಂಗ್ಲೀಷ್ ಬೋಧನಾ ಮಾಧ್ಯಮಗಳಾಗಿವೆ. ಶಾಲೆಯು ವಿಶಾಲವೂ ಸುಂದರವೂ ಆದ ಆವರಣದಲ್ಲಿದ್ದು, ಕಲಿಕೆಗೆ ಅನುಕೂಲಕರವಾದ ವಾತಾವರಣವನ್ನು ಹೊಂದಿದೆ. ಪ್ರತಿಯೊಂದು ಮಗುವಿನ ಸಾಮರ್ಥ್ಯವನ್ನು ಗುರುತಿಸುವ ಹಾಗೂ ಪೋಷಿಸುವ ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡಿದೆ.
- ನಮ್ಮ ದೃಷ್ಟಿ
ರಾಷ್ಟçಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯನ್ನೊಳಗೊAಡ ಮೌಲ್ಯಾಧಾರಿತ ಜ್ಞಾನವನ್ನು ಒದಗಿಸುವ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವುದು; ಮಕ್ಕಳ ಒಟ್ಟಾರೆ ವ್ಯಕ್ತಿತ್ವ ಬೆಳವಣಿಗೆಗಾಗಿ ಅವರಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವಂತಹ ಪ್ರಜೆಗಳನ್ನಾಗಿಸುವುದು.
- ನಮ್ಮ ಗುರಿ
ಶೈಕ್ಷಣಿಕವಾಗಿ ಪ್ರಬುದ್ಧವಾದ ಪರಿಸರದಲ್ಲಿ ಮಕ್ಕಳ ಬೌದ್ಧಿಕ, ಸಾಮಾಜಿಕ, ಶಾರೀರಿಕ ಹಾಗೂ ನೈತಿಕ ಬೆಳವಣಿಗೆಯ ಪೋಷಣೆಯೊಂದಿಗೆ ಉತ್ಕೃಷ್ಟ ಆರೈಕೆಯನ್ನು ಒದಗಿಸುವುದು. ಮಕ್ಕಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ನೆರವಾಗುವುದು ಹಾಗೂ ರಾಷ್ಟçದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಅವರನ್ನು ಸಜ್ಜುಗೊಳಿಸುವುದು.
ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಜ್ಞಾನ, ಸಮಸ್ಯೆ-ಬಗೆಹರಿಸುವಿಕೆ, ನಾಯಕತ್ವ, ಸಂವಹನೆ, ಅಂತರ್ವ್ಯಕ್ತಿಗತ ಕೌಶಲ್ಯಗಳು, ವೈಯಕ್ತಿಕ ಆರೋಗ್ಯ ಹಾಗೂ ಯೋಗಕ್ಷೇಮಗಳ ಮೇಲೆ ಗಮನಕೇಂದ್ರಿತವಾದ ಪರಿವರ್ತಕ ಶೈಕ್ಷಣಿಕ ಅನುಭವವನ್ನು ಸೃಷ್ಟಿಸುವುದು.
ನಮ್ಮ ಬಗ್ಗೆ ತ್ವರಿತ ನೋಟ
2001-02 ರಲ್ಲಿ
ಉಚಿತ ವಸತಿ ಶಾಲೆಯನ್ನು ಸ್ಥಾಪಿಸುವುದು ಬಂಧಿತ ಕಾರ್ಮಿಕರು ಮತ್ತು ದಿನಗೂಲಿಗಳ ಮಕ್ಕಳಿಗಾಗಿ4000 ವಿದ್ಯಾರ್ಥಿಗಳು
ಈಗ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಲೆಸಿದ್ದಾರೆ7+ ವಿಭಿನ್ನ ರಾಜ್ಯ
ಕರ್ನಾಟಕ, ಬಿಹಾರ, ಮಣಿಪುರ, ಜಾರ್ಖಂಡ್ ಮತ್ತು ಮೇಘಾಲಯ.1962-63 ರಲ್ಲಿ
ಸುತ್ತೂರು ಜೆಎಸ್ಎಸ್ ಶಾಲೆ ಸ್ಥಾಪನೆ1000 ವಿದ್ಯಾರ್ಥಿಗಳು
ಸಾವಿರ ಬಲದೊಂದಿಗೆ ಪ್ರಾರಂಭವಾದ ಶಾಲೆ2500 ಬೋರ್ಡರ್ಗಳು
ಎರಡು ಸಾವಿರದ ಐನೂರಕ್ಕೂ ಹೆಚ್ಚು ಸುಂದರರು ಬೋರ್ಡರ್ಗಳಾಗಿದ್ದಾರೆಸುವರ್ಣ ಮಹೋತ್ಸವ
ಈಗ ಪ್ರೌಢಶಾಲೆಗೆ ಸುವರ್ಣ ಮಹೋತ್ಸವ